Total Pageviews

Thursday, April 21, 2011

ಬಯಲು ಸೀಮೆ ಕೊ-ಎಡ್ ಸ್ಕೂಲಿನಲ್ಲಿ ಕೆಮಿಸ್ಟ್ರಿ ಮಾಸ್ತರ್ ರಜೆ ಹಾಕಿದ್ರು. ಮಕ್ಕಳ ಗಲಾಟೆ ಕಂಟ್ರೋಲ್ ಮಾಡೋದಿಕ್ಕೆಕನ್ನಡ ಮಾಸ್ತರ್ ಕ್ಲಾಸಿಗೆ ಬಂದು ಕೆಮಿಸ್ಟ್ರಿ ಹೇಳಿಕೊಡ್ತೀನಿ ಅಂದ್ರು. ಅವರ ಇಂಗ್ಲಿಷ್ ಜ್ಞಾನ ಅಷ್ಟಕ್ಕೆ ಅಷ್ಟೇ. " ಮಕ್ಕಳಾ , ನಾನು ನಿಮಗ ಒಂದು ವಿಷಯುಕ್ತ ಅನಿಲದ ಬಗ್ಗೆ ಹೇಳಿಕೊಡ್ತೀನಿ , ಎಲ್ಲಾರು ಸುಮ್ಕ ಕುಂತು ಕೇಳ್ರಿ. ಪಾಯ್ಝಾನ್ ಗ್ಯಾಸು ಲಂಗದೊಳಗ ಹೋದ್ರ .. ಭಾಳ ತ್ರಾಸ್ ಆಗತಯ್ತಿ ". ಹುಡ್ರೆಲ್ಲ ಹೋ ಅಂತ ಚೀರಿದರು. ಹೆಣ್ಣುಮಕ್ಕಳು ನಾಚಿಕಿ ಇಂದ ತಲಿ ತಳಗ್ ಹಾಕಿದ್ರು. ಕನ್ನಡ ಮಾಸ್ತರ್ ಎಲ್ಲೋ ಕಳೆದು ಹೋದರು. ಈವತ್ತಿನವರೆಗೂ ಹುಡಗರು ಯಾಕೆ ಚೀರಿದರು ಅಂತಗೊತ್ತೇ ಇಲ್ಲ ಪಾಪ ಅವ್ರಿಗೆ .

No comments:

Post a Comment